ಡೈಲಿ ವಾರ್ತೆ: 13/ಮಾರ್ಚ್ /2025

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗಕ್ಕೆ ಎರಡು ರ್‍ಯಾಂಕ್

ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದ ಎಂ.ಕಾಂ.ಎಚ್.ಆರ್.ಡಿ. ವಿದ್ಯಾರ್ಥಿನಿ ವಾಣಿಶ್ರೀ ಇವರು ಮಂಗಳೂರು ವಿಶ್ವವಿದ್ಯಾನಿಲಯದ 2023-24ನೇ ಸಾಲಿನಲ್ಲಿ ಎಂ.ಕಾಂ.ಎಚ್.ಆರ್.ಡಿ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿರುತ್ತಾರೆ. ಇವರು ಕಲ್ಲಡ್ಕ ಸಮೀಪದ ಬೋಳಂತೂರಿನ ವಾಸುದೇವ ಮತ್ತು ವಸಂತಿಯವರ ಪುತ್ರಿಯಾಗಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿನ ವಿದ್ಯಾರ್ಥಿನಿ ತೃಪ್ತಿ ಇವರು ಮಂಗಳೂರು ವಿಶ್ವವಿದ್ಯಾನಿಲಯ 2023-24ನೇ ಸಾಲಿನಲ್ಲಿ ನಡೆಸಿದ ಎಂ.ಕಾಂ. ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಗಳಿಸಿರುತ್ತಾರೆ. ಇವರು ಮಂಜೇಶ್ವರದ ಕಾಟುಕುಕ್ಕೆ ಗ್ರಾಮದ ಬಾಳೆಮೂಲೆಯಲ್ಲಿನ ಜಯರಾಮ ಶೆಟ್ಟಿ ಮತ್ತು ಅನುರಾಧ ಶೆಟ್ಟಿಯವರ ಪುತ್ರಿಯಾಗಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.