ಡೈಲಿ ವಾರ್ತೆ: 01/ಏಪ್ರಿಲ್ /2025

ಭ್ರಷ್ಟಾಚಾರಿಗಳೇ ಭ್ರಷ್ಟಾಚಾರ ವಿರುದ್ಧ ಹೋರಾಟ: ಬಿಜೆಪಿ ಯವರಿಂದ ಜನಾಕ್ರೋಶ ಯಾತ್ರೆ ಇದೊಂದು ಹಾಸ್ಯಾಸ್ಪದ: ಕೋಟ ನಾಗೇಂದ್ರ ಪುತ್ರನ್

ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಜನರಿಗೆ ಯಾವುದೇ ಜನಾಕ್ರೋಶ ಇಲ್ಲ, ದೀನ ದಲಿತರು ಬಡವರು, ಮಧ್ಯಮ ವರ್ಗದವರು ಕಾಂಗ್ರೆಸ್ ಸರ್ಕಾರದಿಂದ ಇಂದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ.

ಹಿಂದುಳಿದ ವರ್ಗಗಳ ಯುವಕರು ಇಂದು ವಿದ್ಯಾವಂತರಾಗುತ್ತಿದ್ದಾರೆ. ಬಿಜೆಪಿಯವರ ಡೋಂಗಿ ಹಿಂದುತ್ವ ನಂಬಿ ಜೈಲಿಗೆ ಹೋಗುವವರ ಸಂಖ್ಯೆ ಕೂಡ ಕಡಿಮೆಯಾಗಿದೆ.
ಹಾಗಾಗಿ ಬಿಜೆಪಿ ಅವರು ಹೊಸ ನಾಟಕದ ಮುಖಾಂತರ ಜನರನ್ನ ಮಂಗ ಮಾಡಲು ಹೊರಟಿರುವಂತಿದೆ ಎಂದು ನಾಗೇಂದ್ರ ಪುತ್ರನ್ ಹೇಳಿದರು.

ಏಪ್ರಿಲ್ 10 ರಂದು ಉಡುಪಿಯಲ್ಲಿ ಬಿಜೆಪಿ ಶಾಸಕರು ಮತ್ತು ಬಿಜೆಪಿ ನಾಯಕರಿಂದ ಜನಾಕ್ರೋಶ ಯಾತ್ರೆ ಪ್ರತಿಭಟನೆ ಮಾಡಲು ಹೊರಟ್ಟಿದ್ದಾರೆ.

ವಿಶೇಷೆಂದರೆ ಸರಕಾರದ ಭ್ರಷ್ಟಾಚಾರ ವಿರುದ್ಧ, ರೈತ ವಿರೋಧಿ ವಿರುದ್ಧ, ಬೆಲೆ ಹೆಚ್ಚಳದ ವಿರುದ್ಧ ಹೀಗೆ ಬೇರೆ ಬೇರೆ ವಿಚಾರದ ಬಗ್ಗೆ ಪ್ರತಿಭಟನೆ ಮಾಡಲು ಹೊರಟ
ಈ ಬಿಜೆಪಿ ಅವರಿಗೆ ನನ್ನದೊಂದು ಪ್ರೆಶ್ನೆ.?

ನಿಮಗೆ ಮಾನ ಮರ್ಯಾದೆ ಏನು ಇಲ್ವಾ ನೀವು ಮಾಡಿದ ಭ್ರಷ್ಟಾಚಾರಗಳು ಕರ್ನಾಟಕದ ಎಲ್ಲಾ ಕವಿಗಳು ಬರೆದ ಕಾದಂಬರಿ ಪುಸ್ತಕದ ಪುಟಗಳೇ ಸಾಕುವುದಿಲ್ಲ ಅಷ್ಟೊಂದು ಭ್ರಷ್ಟಾಚಾರ ಮಾಡಿದ ನೀವು ಯಾವ ಮುಖ ಹಿಡಿದುಕೊಂಡು ಜನಕ್ರೋಶ ಯಾತ್ರೆ ಪ್ರತಿಭಟನೆ ಮಾಡಲು ಹೊರಟಿದ್ದೀರಿ.?

ಅಪ್ಪ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯತ್ನಾಳ್ ಅವರನ್ನು ಪಕ್ಷದಿಂದ ಕಿತ್ತು ಬಿಸಾಡಿ ಈಗ ವಿಜೇಂದ್ರ ಮತ್ತು ಅಪ್ಪ ಮಕ್ಕಳು ಯತ್ನಾಳ್ ವಿರುದ್ಧ ಸಾರಿರುವ ಸಮರವನ್ನು ಮುಚ್ಚಿ ಹಾಕಿಕೊಳ್ಳುವ ಉದ್ದೇಶದಿಂದ ಇಡೀ ರಾಜ್ಯದ್ಯಂತ ಜನಕ್ರೋಶ ಪ್ರತಿಭಟನೆ ಮಾಡಲು ಹೊರಟಿದ್ದೀರಿ ಇದೊಂದು ಹಾಸ್ಯಾಸ್ಪದ ಎಂದರು.

ಬಿಜೆಪಿಯವರೇ ನೀವು ರಾಜ್ಯ ಸರ್ಕಾರದ ಮೇಲೆ ಎಷ್ಟೇ ಗೂಬೆಕೂರಿಸಲು ಹೊರಟರು ಜನ ನಿಮ್ಮನ್ನು ನಂಬುವ ಸ್ಥಿತಿಯಲಿಲ್ಲ.

ಅಣ್ಣಾಮಲೈ ತಮಿಳುನಾಡಿನಲ್ಲಿ ಚಾಟಿಯಲ್ಲಿ ಹೊಡೆದುಕೊಂಡ ಹಾಗೆ ಕರ್ನಾಟಕದಲ್ಲಿ ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡಿ ಜನತೆಯಿಂದ ಚಾಟಿ ಏಟು ಹೊಡೆಸಿ ಕೊಳ್ಳುವುದು ಸತ್ಯ.

ಭ್ರಷ್ಟಾಚಾರಿಗಳೇ ಭ್ರಷ್ಟಾಚಾರ ವಿರುದ್ಧ ಹೋರಾಟ, ರೈತ ವಿರೋಧಿಗಳೇ ರೈತರ ಪರ ಹೋರಾಟ, ಬೆಲೆ ಏರಿಸಿದವರೇ ಬೆಲೆ ಏರಿಕೆ ವಿರುದ್ಧ ಹೊರಟ ಮಾಡುವುದು, ಇವೆಲ್ಲ ಬಿಜೆಪಿ ನಾಟಕ ಜನ ಬಲ್ಲರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.