ಡೈಲಿ ವಾರ್ತೆ: 29/ಏಪ್ರಿಲ್/2025

ಕಿಲ್ಲೂರು : ಜಂ-ಇಯ್ಯತು ಮಿಸ್ಬಾಹಿಲ್ ಹುದಾ ವಾರ್ಷಿಕೋತ್ಸವ ಪ್ರಯುಕ್ತ ಜಲಾಲಿಯ್ಯ ಹಾಗೂ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ

ಬೆಳ್ತಂಗಡಿ : ಪಾಣೆಮಂಗಳೂರು ಆಲಡ್ಕ-ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೈಖುನಾ ಬಿ.ಎಚ್. ಅಬೂಸ್ವಾಲಿಹ್ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಕಿಲ್ಲೂರು ಇದರ 24ನೇ ವಾರ್ಷಿಕೋತ್ಸವ ಪ್ರಯುಕ್ತ ಜಲಾಲಿಯ್ಯಾ ಹಾಗೂ ಬುರ್‍ದಾ ಮಜ್ಲಿಸ್ ಕಾರ್ಯಕ್ರಮಗಳು ಬೆಳ್ತಂಗಡಿ ತಾಲೂಕಿನ ಕಿಲ್ಲೂರು ದಾರುಶ್ಶರೀಫ್ ಇಲ್ಲಿನ ಮರ್‍ಹೂಂ ಹಾಜಿ ಅಬ್ದುಲ್ ಖಾದಿರ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಲಾಲಿಯ್ಯಾ ರಾತೀಬ್, ಬುರ್‍ದಾ ಮಜ್ಲಿಸ್, ಖತಮುಲ್ ಕುರ್-ಆನ್, ದುವಾ, ನಸೀಹತ್ ಹಾಗೂ ಮೌಲಿದ್ ಪಾರಾಯಣ ನಡೆಯಿತು. ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಹಾಗೂ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಅವರು ಜಲಾಲಿಯ್ಯಾ ರಾತೀಬ್ ಹಾಗೂ ದುವಾ ನೇತೃತ್ವ ವಹಿಸಿದ್ದರು. ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರು ಖತಮುಲ್ ಕುರ್-ಆನ್ ನೇತೃತ್ವ ವಹಿಸಿದ್ದರು. ಶೈಖುನಾ

ಬಿ.ಎಚ್. ಅಬೂಸ್ವಾಲಿಹ್ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.

ಸಯ್ಯಿದ್ ಬದ್ರುದ್ದೀನ್ ತಂಙಳ್ ಪೊಮ್ಮಾಜೆ, ಪೆರ್ನೆ ಉಸ್ತಾದ್, ಪೂಂಜಾಲಕಟ್ಟೆ ಉಸ್ತಾದ್, ಕಾಸಿಂ ಮದನಿ ಕರಾಯ, ಕಾರ್ಕಳ-ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಬಿ.ಎ. ಶರೀಫ್ ಸಅದಿ ಅಲ್-ಕಾಮಿಲಿ ಕಿಲ್ಲೂರು, ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ, ಕಾಜೂರು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಕೆ.ಯು. ಇಬ್ರಾಹಿಂ, ಮಿಸ್ಬಾಹಿಲ್ ಹುದಾ ಅಧ್ಯಕ್ಷ ಹಾಜಿ ಎನ್.ಎಚ್.ಆದಂ ಫೈಝಿ ನೆಹರುನಗರ, ಕಾರ್ಯದರ್ಶಿ ಪಿ.ಎಸ್. ತ್ವಾಹಾ ಸಅದಿ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಸಯ್ಯಿದ್ ಬಶರ್ ಬುರ್‍ದಾ ಸಂಘ ಅಜಿಲಮೊಗರು ಹಾಗೂ ಆಶಿಕುರ್ರಸೂಲ್ ಬುರ್‍ದಾ ಸಂಘ ಆಲಡ್ಕ-ಪಾಣೆಮಂಗಳೂರು ತಂಡದಿಂದ ಬುರ್‍ದಾ ಆಲಾಪನೆ ನಡೆಯಿತು.