ಡೈಲಿ ವಾರ್ತೆ: 14/MAY/2025

ಕೊರಗ ಮಕ್ಕಳ ಶೈಕ್ಷಣಿಕ ಬಿಸಿಗೆ ಶಿಬಿರ

ಜಿಲ್ಲಾಡಳಿತ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಹಾಗೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ – ಕೇರಳ ಇವರ ಜಂಟಿ ಆಶ್ರಯದಲ್ಲಿ ಕೊರಗ ಮಕ್ಕಳ ಶೈಕ್ಷಣಿಕ ಬಿಸಿಗೆ ಶಿಬಿರವನ್ನು ಆದಿವಾಸಿ ಜೀವನ ಶಿಕ್ಷಣ ಕೇಂದ್ರ ಪೆರ್ನಾಲು ನಲ್ಲಿ ಅರಂಭಗೊಂಡಿತು.
ಪ್ರತಿಭಾ.ಆರ್ ತಹಶೀಲ್ದಾರರು ಕಾಪು ತಾಲೂಕು ಇವರನ್ನು ಮಕ್ಕಳು ಡೋಲು ಬಡಿಯುವುದರ ಮೂಲಕ ಸ್ವಾಗತಿಸಿ, ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರತಿಭಾ.ಆರ್ ಇವರು ಕಾರ್ಯಕ್ರಮದ ಕುರಿತು ಹಿತನುಡಿಗಳನ್ನಾಡಿ ಶುಭ ಕೋರಿದರು.
ಒಕ್ಕೂಟದ ಅಧ್ಯಕ್ಷರಾದ ಸುಶೀಲಾ ನಾಡ ಹಾಗೂ ಸಂಯೋಜಕರಾದ ಪುತ್ರನ್ ಹೆಬ್ರಿ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೃಷ್ಣಪ್ಪ ಬಂಬಿಲ ಹಾಗೂ ದೀಪ್ತಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಬಿರಾರ್ಥಿಗಳ ಪ್ರತಿನಿಧಿಗಳಾಗಿ ಹರಿಣಾಕ್ಷಿ ಮತ್ತು ನಿಶಾಂತ್ ರವರು ವೇದಿಕೆಯಲ್ಲಿ ಆಸೀನರಾಗಿದ್ದರು.
ಮುಖ್ಯ ಅತಿಥಿಗಳನ್ನು ಶಿಬಿರಾರ್ಥಿಯಾದ ವಲ್ಮ ಸ್ವಾಗತಿಸಿದರೆ ಸಮುದಾಯ ಕಾರ್ಯಕರ್ತರಾದ ಸುಪ್ರಿಯಾ ಎಸ್. ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪರಿಸರ ಶಿಕ್ಷಕಿ ದೀಪ್ತಿ ಇವರು ಪ್ರಾತ್ಯಕ್ಷಿಕೆ ಮೂಲಕ ಪರಿಸರ ಚಟುವಟಿಕೆ ವಿಷಯದ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪರಿಸರದ ಮೇಲೆ ಕಾಳಜಿಯನ್ನು ಹೊಂದಿರುವ ಇವರು ಮಕ್ಕಳಿಗೆ ಪರಿಸರದ ಮೇಲೆ ಕಾಳಜಿ ಮೂಡಿಸುವಂತೆ ಪ್ರೇರೇಪಿಸಿದರು. ಹಾಗೂ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. ಹಾಗೂ ಮಕ್ಕಳನ್ನು ಕ್ರಿಯಾತ್ಮಕವಾಗಿ ಜೋಡಿಸಿಕೊಂಡು ಪರಿಸರದ ಕುರಿತು ವಿವರವಾಗಿ ಮಾತನಾಡಿದರು.

ಊಟದ ವಿರಾಮದ ನಂತರ ಕೃಷ್ಣಪ್ಪ ಬಂಬಿಲ ಹಾಗೂ ತಂಡದವರಿಂದ ಮೊದಲಿಗೆ ಮಕ್ಕಳ ತಂಡ ರಚಿಸಿದರು. ಜವಾಬ್ದಾರಿಗಳನ್ನು ಹಾಗೂ ದಿನ ನಿತ್ಯದ ಕೆಲಸಗಳನ್ನು ಹಂಚುವುದರ ಮೂಲಕ ಮಕ್ಕಳಲ್ಲಿ ನಾಯಕತ್ವ ಬೆಳೆಸುವಂತೆ ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿದರು.
ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಹಾಗೂ ಆಟ ಆಡಿಸುವ ಮೂಲಕ ಮಕ್ಕಳನ್ನು 5 ದಿನದ ತರಬೇತಿಗೆ ತಯಾರಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಬಿತಾ ಗುಂಡ್ಮಿ ರವರು ಸಮುದಾಯದ ಪರಿಚಯವನ್ನು ಮಾಡುವುದರ ಜೊತೆಗೆ ಸಮಸ್ಯೆಗಳು ಹೇಗೆ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು.

ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿರುವ ಉಮೇಶ್ ರವರು ಮಕ್ಕಳಿಗೆ ಸುಲಭ ವಿಧಾನದಲ್ಲಿ ಚಿತ್ರ ಬಿಡಿಸುವುದನ್ನು ಹೇಳಿಕೊಟ್ಟರು.

ಸಂಜೆ 6:00 ರಿಂದ 9:00 ರವರೆಗೆ ಕೃಷ್ಣಪ್ಪ ಬಂಬಿಲ ಹಾಗೂ ತಂಡದವರು ರಂಗ ತರಬೇತಿಯನ್ನು ನೀಡಿದರು. ಹಾಡು, ಅಭಿನಯಗಳ ಮೂಲಕ ಮಕ್ಕಳಿಗೆ ನಟನೆಯ ಪಾತ್ರಗಳ ಬಗ್ಗೆ ತಿಳಿಸಿದರು.