ಡೈಲಿ ವಾರ್ತೆ: 09/JUNE/2025

ಅಂಕೋಲಾ| ಸಮುದ್ರದಲ್ಲಿ ಈಜಲು ಇಳಿದ ಪ್ರವಾಸಿಗ ನೀರುಪಾಲು!

ಅಂಕೋಲಾ:ಸಮುದ್ರದಲ್ಲಿ ಈಜಲು ಇಳಿದ ಪ್ರವಾಸಿಗನೊಬ್ಬ ನೀರುಪಾಲದ ಘಟನೆ ಅಂಕೋಲಾದಲ್ಲಿ ನಡೆದಿದೆ.

ಸಮುದ್ರಪಾಲಾದ ಯುವಕ ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿವಾಸಿ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಎಂದು ಗುರುತಿಸಲಾಗಿದೆ.

ಬಕ್ರೀದ್ ರಜೆ ಹಿನ್ನೆಲೆ ಎರಡು ಬೈಕಗಳಲ್ಲಿ ನಾಲ್ಕು ಮಂದಿ ಗೆಳೆಯರು ಹುಬ್ಬಳ್ಳಿಯಿಂದ ಕರಾವಳಿ ತಾಲೂಕುಗಳಿಗೆ ಪ್ರವಾಸಕ್ಕೆಂದು ಬಂದಿದ್ದರು.

ನಾಲ್ವರು ಗೆಳೆಯರು ಅಂಕೋಲಾ ಸಮುದ್ರದಲ್ಲಿ ಈಜಲು ಇಳಿದಿದ್ದರು. ನಾಲ್ವರ ಪೈಕಿ ಓರ್ವ ಸಮುದ್ರಪಾಲಗಿದ್ದಾನೆ.
ಯುವಕನ ಶವವನ್ನು ಸ್ಥಳೀಯರ ಸಹಕಾರದಿಂದ ಮೇಲಕ್ಕೆ ತರಲಾಯಿತು. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.