ಡೈಲಿ ವಾರ್ತೆ: 15/JUNE/2025

ಬೆಣ್ಣೆಕುದ್ರು ನೂತನ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ

ಬ್ರಹ್ಮಾವರ| ಮೊಗವೀರ ಸಮಾಜದ ಕುಲದೇವಿ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ನೂತನ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ ಜೂ. 15 ರಂದು ಜರುಗಿತು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾಡೋಜ ಡಾ. ಜಿ ಶಂಕರ್ , ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಆನಂದ್ ಸಿ.ಕುಂದರ್,, ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಎಸ್. ಅಮೀನ್, ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಗಳಾದ ಶಂಕರ್ ಸಾಲ್ಯಾನ್, ಉದ್ಯಮಿಗಳಾದ ಶಿವ.ಎಸ್ ಕರ್ಕೇರಾ, ಮೊಗವೀರ ಮಹಾಜನ ಸಂಘ (ರಿ )ತೀರ್ಥಹಳ್ಳಿ ಇದರ ಅಧ್ಯಕ್ಷರಾದ ರಾಘವೇಂದ್ರ ಟಿ.ಎಸ್ ಮತ್ತು ಪದಾಧಿಕಾರಿಗಳು, ಉಳ್ಳಾಲ ಮಾರುತಿ ಜನ ಸೇವಾ ಸಂಘದ ಗೌರವಾಧ್ಯಕ್ಷರಾದ ವರದರಾಜ ಬಂಗೇರ ಹಾಗೂ ಪದಾಧಿಕಾರಿಗಳು, ಮಲ್ಪೆ ಮತ್ಸೋದ್ಯಮಿಗಳಾದ ಶ್ರೀ ಹರಿಯಪ್ಪ ಕೋಟ್ಯಾನ್, ಶ್ರೀ ಸುಧಾಕರ್ ಮೆಂಡನ್, ಇಂಜಿನಿಯರ್ ಗಳಾದ ಶ್ರೀ ಯೋಗೀಶ್ ಚಂದ್ರಾಧರ್ ಹಾಗೂ ಗುರುಪ್ರಸಾದ್, ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮೊಗವೀರ ಯುವ ಸಂಘಟನೆ (ರಿ )ಉಡುಪಿ, ಇದರ ಪದಾಧಿಕಾರಿಗಳು,ಬಾರ್ಕೂರು ಮೊಗವೀರ ಸಯುಕ್ತ ಸಭಾದ ಪದಾಧಿಕಾರಿಗಳು,ಬೆಣ್ಣೆ ಕುದ್ರು ಗ್ರಾಮ ಸಭಾ, ಯುವಕ ಸಂಘ ಹಾಗೂ ಮಹಿಳಾ ಸಂಘದ ಸರ್ವ ಪದಾಧಿಕಾರಿಗಳು, ಹಾಗೂ ಸಮಸ್ತ ಸಮಾಜ ಬಾಂಧವರು ಉಪಸ್ಥಿತರಿದ್ದರು