ಡೈಲಿ ವಾರ್ತೆ: 21/JUNE/2025

ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ: ಯೋಗಕ್ಕೆ ವಯಸ್ಸಿನ ಭೇದವಿಲ್ಲ, ಜಾತಿ ಭೇದವಿಲ್ಲ: ಯೋಗ ಗುರು ಕಿರಣ್ ಕುಮಾರ್ ಬಿ.

ಕುಂದಾಪುರ: ‘ಯೋಗ’ ಎಂಬ ಪದವು ‘ಯುಜ್’ ಎಂಬ ಸಂಸ್ಕೃತ ಪದದಿಂದ ಬಂದಿದೆ,
ಯುಜ್ ಎಂದ್ರೆ ಕೂಡಿಸು, ಸೇರಿಸು ಎಂದರ್ಥ.
ಯಾವುದನ್ನ ಯಾವುದಕ್ಕೆ ಸೇರಿಸಬೇಕಂದ್ರೆ
ಮನಸು ಮತ್ತು ದೇಹವನ್ನು ಒಗ್ಗೂಡಿಸುವುದನ್ನು ಯೋಗ ಎನ್ನುತ್ತಾರೆ ಎಂದು ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅತ್ಯೋತ್ತಮ ಯೋಗಪಟು, ನಾಟಿ ವೈದ್ಯರಾಗಿ ಸೇವೆ ಸಲ್ಲಿಸಿದ ಕಿರಣ್ ಕುಮಾರ್ ಬಿ. ಹೇಳಿದರು.
ಅವರು ಜೂ. 21 ರಂದು ಶನಿವಾರ ಬೆಳಿಗ್ಗೆ ಕುಂದಾಪುರ ಎಕ್ಸಲೆಂಟ್ ಪಿಯು ಕಾಲೇಜ್ ಸುಣ್ಣಾರಿಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಯೋಗಾಸನ ವನ್ನು ಉದ್ಘಾಟಿಸಿ ಮಾತನಾಡಿದರು.

ಅರೋಗ್ಯ ಚನ್ನಾಗಿ ಇರಬೇಕಾದ್ರೆ ಯೋಗ ಅತ್ಯುತ್ತಮವಾದ ವಿಧಾನವಾಗಿದೆ.
ಯೋಗದಿಂದ ಮನುಷ್ಯ ಶಾಂತ ಚಿತ್ತನಾಗುತ್ತಾನೆ, ಯಾವುದೇ ಒತ್ತಡಗಳು ಇರೋದಿಲ್ಲ, ಯಾವುದೇ ಸಂದರ್ಭದಲ್ಲಿ ನಮ್ಮನ್ನು ನಾವು ನಿಭಾಯಿಸುವ ಚೈತನ್ಯ ನೀಡುತ್ತದೆ. ಆದ್ದರಿಂದ ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿ ಕೊಂಡರೆ ಅರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದರು.

ಯೋಗಕ್ಕೆ ವಯಸ್ಸಿನ ಭೇದವಿಲ್ಲ, ಜಾತಿ ಭೇದವಿಲ್ಲ, ಪ್ರದೇಶದ ಭೇದವಿಲ್ಲ, ಯಾವುದೇ ಗೊಂದಲವಿಲ್ಲದೆ ವಿಶ್ವದಾದ್ಯಂತ 190 ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಎಂದು ಹೇಳಿದರು.
ಅಲ್ಲದೆ ಪ್ರಾಣಾಯಾಮ, ತ್ರಿಕೋನಾಸನ, ಮತ್ಸ್ಯಾಸನ, ಭುಜಂಗಾಸನ, ಪದ್ಮಾಸನ, ಧ್ಯಾನ ಹಾಗೂ ಇನ್ನಿತರ ಆಸನಗಳನ್ನು ಲೀಲಾಜಾಲವಾಗಿ ಮಾಡಿ ವಿದ್ಯಾರ್ಥಿ ಸಮೂಹವನ್ನು ಗಮನ ಸೆಳೆದು, ವಿದ್ಯಾರ್ಥಿಗಳಿಗೂ ಯೋಗಾಸನದ ಮಹತ್ವ ಮತ್ತು ಪ್ರಾತ್ಯಕ್ಷಿಕೆಯನ್ನು ಯೋಗಪಟು, ನಾಟಿ ವೈದ್ಯ ಕಿರಣ್ ಕುಮಾರ್ ಬಿ. ತೋರಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಳೆದ ಶೈಕ್ಷಣಿಕ ವರ್ಷದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಕೌಶಿಕ್ ಎಸ್. ಅವರನ್ನು ಸನ್ಮಾನಿಸಲಾಯಿತು.
ಇವರು ಅಂತರ್ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕದಿಂದ ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳಲ್ಲಿ ಕೌಶಿಕ್ ಎಸ್. ಇವರೊಬ್ಬರಾಗಿದ್ದಾರೆ.

ಕಾರ್ಯಕ್ರಮದ ವೇದಿಕೆಯಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಉಪ ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್ ಉಪಸ್ಥಿತರಿದ್ದರು. ಶಿಕ್ಷಕಿ ಉಷಲತಾ ಸ್ವಾಗತಿಸಿದರು.
ಕನ್ನಡ ಶಿಕ್ಷಕ ಸಂದೀಪ್ ಕಾರ್ಯಕ್ರಮವನ್ನು ನಿರೂಪಿಸಿ.
ಶಿಕ್ಷಕಿ ಶಿಲ್ಪಾರಾಣಿ ವಂದಿಸಿದರು.