



ಡೈಲಿ ವಾರ್ತೆ: 24/JUNE/2025


ಮಹಾಲಿಂಗೇಶ್ವರ ಸನ್ನಿಧಾನದಲ್ಲಿ ಗಿಳಿಯಾರು ಯುವಕ ಮಂಡಲ ನೂತನ ಆಡಳಿತ ಮಂಡಳಿಯ ರಚನೆ

ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಮೂಡು ಗಿಳಿಯಾರು ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ದಿನಾಂಕ 22/6.2023 ರಂದು ಸಂಜೆ 5:00 ಗಂಟೆಗೆ ಗಿಳಿಯಾರು ಯುವಕ ಮಂಡಲದ ಮಹಾಸಭೆ ನಡೆಯಿತು.
ಈ ಸಭೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಭೆಯಲ್ಲಿ ತೀರ್ಮಾನಿಸಿದಂತೆ ಮುಂದಿನ ಎರಡು ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಭೆಯ ತೀರ್ಮಾನದಂತೆ ಅಧ್ಯಕ್ಷರಾಗಿ ಸುಭಾಷ್ ಪೂಜಾರಿ, ಉಪಾಧ್ಯಕ್ಷರಾಗಿ ಆದರ್ಶ ಗಿಳಿಯಾರು,
ಕಾರ್ಯದರ್ಶಿಯಾಗಿ ನಂದೀಶ್ ಹೇರ್ಳೆ
ಜೊತೆ ಕಾರ್ಯದರ್ಶಿಯಾಗಿ ನಯನ ಗಿಳಿಯಾರು
ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ
ಜೊತೆ ಕೋಶಾಧಿಕಾರಿಯಾಗಿ ಭಾರ್ಗವ ಜಿ. ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.