


ಡೈಲಿ ವಾರ್ತೆ: 18/ಆಗಸ್ಟ್/ 2025


ಹೆಬ್ಬಾಳ ಮೇಲ್ಸೆತುವೆ ಸಂಚಾರ ಸಾರ್ವಜನಿಕರಿಗೆ ಮುಕ್ತ: ಸಿಎಂ ಅವರಿಂದ ಉದ್ಘಾಟನೆ, ಡಿಸಿಎಂ ಅವರಿಂದ ಬೈಕ್ ಮೂಲಕ ಚಾಲನೆ

ಬೆಂಗಳೂರು: ರಾಜಧಾನಿಯ ಟ್ರಾಫಿಕ್ ದಟ್ಟಣೆಯ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಹೆಬ್ಬಾಳದಲ್ಲಿ ಪ್ರಯಾಣಿಕರ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಬಹು ದೀರ್ಘದ ಹೆಬ್ಬಾಳದ ನೂತನ ಮೇಲ್ಸೆತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಂದು ಉದ್ಘಾಟಿಸಿದರು.

ಈ ನೂತನ ಮೇಲ್ಸೆತುವೆ ವಿಸ್ತರಣೆಯಿದಾಗಿ ಕೆಆರ್ ಪುರಂ ಹಾಗೂ ನಾಗವಾರದಿಂದ ಮೇಕ್ರಿ ವೃತ್ತಕ್ಕೆ ಸಂಚಾರ ಸುಗಮಗೊಳಿಸಲಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಸೆಂಟ್ರಲ್ ಕಡೆಗಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ.
94 ಕೋಟಿ ವೆಚ್ಚದಲ್ಲಿ ಬಿಡಿಎ ಈ ಮೇಲ್ಸೆತುವೆ ನಿರ್ಮಾಣ ಮಾಡಿದ್ದು, ಸುಮಾರು 500-700 ಮೀಟರ್ನ ಈ ಹಾದಿಯನ್ನು 31 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಮೇಲ್ಸೆತುವೆಯಿಂದಾಗಿ ಹೆಬ್ಬಾಳ ಜಂಕ್ಷನ್ನಲ್ಲಿ ಟ್ರಾಫಿಕ್ ದಟ್ಟಣೆ ಶೇ. 30ರಷ್ಟು ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಹಲವು ವರ್ಷಗಳಿಂದ ಈ ಯೋಜನೆ ಬಾಕಿ ಉಳಿದಿತ್ತು. ನಾನು ಕಚೇರಿಯಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಅಗತ್ಯವಾದ ಎಲ್ಲಾ ನಿಧಿ ಮತ್ತು ಒಪ್ಪಿಗೆ ನೀಡಿದೆ. ಒಟ್ಟಾರೆ ಯೋಜನೆಯಲ್ಲಿ ₹300 ಕೋಟಿಗೆ ಅಂದಾಜಿಸಲಾಗಿತ್ತು. ಇದನ್ನು 180 ಕೋಟಿ ರೂ.ನಲ್ಲಿ ಮುಗಿಸಿದ್ದು, ಮುಂದಿನ ತಿಂಗಳುಗಳಲ್ಲಿ ಹೆಚ್ಚುವರಿ ಮಾರ್ಗ ಮತ್ತು ಸುರಂಗ ಸೇರಿದಂತೆ ಹೆಚ್ಚಿನ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರು.
ಈ ಮೇಲ್ಸೆತುವೆ ವಿಸ್ತರಣೆಯಿಂದಾಗಿ ಹೆಬ್ಬಾಳದಲ್ಲಿ ಟ್ರಾಫಿಕ್ ದಟ್ಟಣೆ ತಗ್ಗಲಿದೆ. ಮೇಕ್ರಿ ವೃತ್ತದ ಬಳಿ ಅದರಲ್ಲೂ ಅಂಡರ್ಪಾಸ್ ಬಳಿ ಈ ದಟ್ಟಣೆ ಹೆಚ್ಚುವ ಕುರಿತು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ನಡೆಸಲಾದ ಪ್ರಾಯೋಗಿಕ ಸಂಚಾರಗಳು ಹೆಬ್ಬಾಳದಲ್ಲಿ ಸುಗಮ ಸಂಚಾರವನ್ನು ತೋರಿಸಿದ್ದು, ಮೇಖ್ರಿ ವೃತ್ತದ ಕಡೆಗೆ ಕಾಯುವಿಕೆ ಅವಧಿ ಹೆಚ್ಚಾಗುವ ಕುರಿತು ತಿಳಿಸಿದ್ದಾರೆ
ಎಂದರು.
ಹೆಬ್ಬಾಳ ಮೇಲ್ಸೆತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಭೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್ಎ ಹ್ಯಾರಿಸ್, ಹಿರಿಯ ಅಧಿಕಾರಿಗಳು ಮತ್ತು ಮಾಜಿ ಸಂಸದೆ ರಮ್ಯಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರು ರಿಬ್ಬನ್ ಕಟಿಂಗ್ ಮೂಲಕ ಮೇಲ್ಸೆತುವೆ ಉದ್ಘಾಟನೆ ಮಾಡಿದರು. ಡಿಸಿಎಂ ತಮ್ಮ ಹಳೆಯ ಬೈಕ್ ಮೂಲಕ ಈ ಮೇಲ್ಸೆತುವೆ ಮೇಲೆ ಚಾಲನೆ ಮಾಡಿದ್ದು, ಇದಕ್ಕೆ ಸಿಎಂ ಹಸಿರು ನಿಶಾನೆ ತೋರಿದ್ದು, ವಿಶೇಷವಾಗಿತ್ತು.