


ಡೈಲಿ ವಾರ್ತೆ: 17/ಸೆ./2025


ಭಟ್ಕಳ: ಹೆಬ್ಳೆ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ – ಇಬ್ಬರ ಬಂಧನ

ಭಟ್ಕಳ : ಹೆಬ್ಳೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 14 ರ ರಾತ್ರಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಶಿರಾಲಿಯ ನಿವಾಸಿ ಹಸನ್ ಬ್ಯಾರಿ ಅವರ ಪುತ್ರ ಅಮೀರ್ ಮತ್ತು ಭಟ್ಕಳದ ನಿವಾಸಿ ಅಬ್ದುಲ್ ಗಫರ್ ಅವರ ಪುತ್ರ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ.
ಆರೋಪಿಗಳು ದೇವಸ್ಥಾನದ ಹುಂಡಿ ಒಡೆದು ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ಅಪರಾಧಕ್ಕೆ ಬಳಸಲಾದ ಎರಡು ಮೋಟಾರ್ ಸೈಕಲ್ಗಳು ಸೇರಿದಂತೆ ₹2,21,295 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.
ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.