

ಡೈಲಿ ವಾರ್ತೆ: ಫೆ./11/2026
ಬಡ ಬಿದಿಬದಿ ವ್ಯಾಪಾರಸ್ಥರ ಮೇಲಿನ ಬುಲ್ಡೊಜರ್ ಕಾರ್ಯಾಚರಣೆ : ಎಸ್.ಡಿ.ಟಿ.ಯು ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ ಖಂಡನೆ

ಮಂಗಳೂರು : ಪೆ10 ; ಮಂಗಳೂರಿನ ತೊಕ್ಕೋಟುನಿಂದ ಅಸೈಗೋಳಿಯವರೆಗೆ ಲೋಕೋಪಯೋಗಿ ಇಲಾಖೆಯವರು ಬಡ ಬಿದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರೆವುಗೊಳಿಸಲು ಬುಲ್ಡೊಜರ್ ಕಾರ್ಯಾಚರಣೆ ನಡೆಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ( ಎಸ್.ಡಿ.ಟಿ.ಯು ) ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ರವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿದ ಅವರು ರಾಜ್ಯದ ಸಭಾಪತಿ ಪೀಠವನ್ನು ಅಲಂಕರಿಸಿರುವ ಉಳ್ಳಾಲ ಶಾಸಕರ ಕ್ಷೇತ್ರದಲ್ಲಿ ಬಡ ಬಿದಿಬದಿ ವ್ಯಾಪಾರಸ್ಥರ ಮೇಲೆ ಲೋಕೋಪಯೋಗಿ ಇಲಾಖೆಯವರು ಬುಲ್ಡೊಜರ್ ಕಾರ್ಯಾಚರಣೆ ನಡೆಸಿರುವುದು ಘೋರ ಅನ್ಯಾಯವಾಗಿದೆ.
ಸಂಸತ್ ನಿಂದ ಅಂಗಿಕರಿಸಲ್ಪಟ್ಟ
ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ, 2014 ರ ಪ್ರಕಾರ ಬೀದಿ ಬದಿ ವ್ಯಪಾರಿಗಳ ಹಕ್ಕುಗಳ ರಕ್ಷಣೆ ಮತ್ತು ನಿಯಂತ್ರಣಕ್ಕಾಗಿ ಸ್ಥಳೀಯ ಸಂಸ್ಥೆಗಳು, ಬೀದಿ ವ್ಯಾಪಾರಿಗಳ ಪ್ರತಿನಿಧಿಗಳು, ಪೊಲೀಸರು ಮತ್ತು ಎನ್ಜಿಒಗಳನ್ನು ಒಳಗೊಂಡ ಪಟ್ಟಣ ವ್ಯಪಾರ ಸಮಿತಿ ರಚಿಸಿ ಅರ್ಹ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ ಕಾನೂನು ಬದ್ದಗೊಳಿಸುವ ನಿಯಮ ಇದ್ದರೂ ಬಡ ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುವ ದಬ್ಬಾಳಿಕೆ ಶೋಷಣೆಗೆ ಮಾತ್ರ ಕೊನೆ ಇಲ್ಲ ಈ ಶೋಷಣೆಯ ಬಗ್ಗೆ ಅಧಿಕೃತರು ಉತ್ತರಿಸಲೇ ಬೇಕು ಎಂದು ಎಸ್ಡಿಟಿಯು ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
ಈ ರೀತಿಯ ಕಾನೂನು ಬಾಹಿರ ದಾಳಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಸಹಿಸುವುದಿಲ್ಲ ಬಡ ಬಿದಿಬದಿ ವ್ಯಾಪಾರಸ್ಥರ ಮೇಲೆ ಕಾರ್ಯಾಚರಣೆ ಮುಂದುವರೆದರೆ ಎಸ್.ಡಿ.ಟಿ.ಯು ಜಿಲ್ಲಾ ಸಮಿತಿಯು ಎಲ್ಲಾ ಬಿದಿಬದಿ ವ್ಯಾಪಾರಸ್ಥರನ್ನು ಒಟ್ಟುಗೂಡಿಸಿ ಬೃಹತ್ ಮಟ್ಟದ ಹೋರಾಟ ನಡೆಸುವುದಾಗಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.