ಡೈಲಿ ವಾರ್ತೆ:19 ಜನವರಿ 2023

ಎಸ್ಕೆಎಸ್ಎಸ್ಎಫ್ ಬೋಳಂತೂರು ಶಾಖೆ ಇದರ ಆಶ್ರಯದಲ್ಲಿ 6ನೇ ವಾರ್ಷಿಕ ಮಜ್ಲಿಸುನ್ನೂರು ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣ

ಬೋಳಂತೂರು:ಎಸ್ ಕೆ ಎಸ್ ಎಸ್ ಎಫ್ ಬೋಳಂತೂರು ಶಾಖೆ ಇದರ ಆಶ್ರಯದಲ್ಲಿ 6ನೇ ವಾರ್ಷಿಕ ಮಜ್ಲಿಸುನ್ನೂರು ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣವು ದಿನಾಂಕ 19 – 01 – 2023 ರಂದು ರಾತ್ರಿ 8:00 ಗಂಟೆಗೆ ಸರಿಯಾಗಿ
ಹಿದಾಯತ್ ನಗರ ಕಲ್ಪಣೆ, ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ
ಅಸೆಯ್ಯದ್ ಅಕ್ರಂ ಅಲಿ ತಂಙಳ್ ರಹ್ಮಾನಿ ನೇತೃತ್ವದಲ್ಲಿ ನಡೆಯಿತು.

ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರ್ ರವರು
ಪ್ರಭಾಷಣ ನೀಡಿದರು.

ಅಬ್ದುಲ್ ಸಹದ್ ರವರು ಅಧ್ಯಕ್ಷತೆ ವಹಿಸಿದ್ದು,
ಬೋಳಂತೂರು ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಹದಿ ಉದ್ಘಾಟನೆ ನೆರವೇರಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಕುಡುಂಬಕೋಡಿ, ಕಾರ್ಯದರ್ಶಿ ಅಬ್ಬಾಸ್ ದಂಡೆಮಾರ್, ಮದ್ರಸ ಕಮಿಟಿ ಅಧ್ಯಕ್ಷ ಹನೀಪ್ ಕಲ್ಪಣೆ, ನುಸ್ರತ್ ಕಮಿಟಿ ಅಧ್ಯಕ್ಷ ಅಶ್ರಫ್ ನಾಡಾಜೆ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಶಾಫಿ ಮುರ, ಕ್ರಿಯಾ ಸಮಿತಿ ಅಧ್ಯಕ್ಷ ಉಮರಬ್ಬ ಬಿ ಜಿ, ಮುಬಾರಕ್ ಯಂಗ್ ಮೆನ್ಸ್ ಅಧ್ಯಕ್ಷ ಮುಹಮ್ಮದ್ ಹನೀಪ್ ಕೊಕ್ಕಪುಣಿ, ಮದ್ರಸದ ಸದರ್ ಮುಹಲ್ಲಿಂ ಶಿಯಾಬುದ್ದೀನ್ ಅಝ್ಹರಿ, ಮುಹಲ್ಲಿಂ ಮುಹಮ್ಮದ್ ಮುಸ್ಲಿಯಾರ್, ಮುಅಝೀನ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಮುಹಮ್ಮದ್ ನೌಶಾದ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಕಾಂಪಸ್ಸ್ ವಿಂಗ್ ಚೇರ್ಮಾನ್
ಜಾಬಿರ್ ಮುಬಶ್ಶಿರ್ ಕಾರ್ಯಕ್ರಮ ನಿರೂಪಿಸಿದರು .