ಡೈಲಿ ವಾರ್ತೆ:14 ಫೆಬ್ರವರಿ 2023

ಕರ್ನಾಟಕ ಮುಸ್ಲಿಂ ಜಮಾಅತ್ತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ KMJ ರಿವೈವಲ್ ಮೀಟ್

ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ತ್ ಜಿಲ್ಲಾ ಸಮಿತಿಯ ವತಿಯಿಂದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಜಿಲ್ಲಾ ಮತ್ತು ತಾಲ್ಲೂಕು ತಾಲ್ಲೂಕು ಸಮಿತಿಯ ನಾಯಕರನ್ನು ಸೇರಿಸಿ KMJ ರಿವೈವಲ್ ಮೀಟ್ ಜಾಫರ್ ಅಸ್ಸಖಾಫ್ ತಂಗಳ್ ಕೊಟೇಶ್ವರ ರವರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದ ಮದರ್ ಪ್ಯಾಲೇಸ್ ಮಿನಿ ಹಾಲ್ನಲ್ಲಿ ತಾರೀಕು 14/02 /2023 ರ ಮಂಗಳವಾರ ಮಧ್ಯಾಹ್ನ 12.30 ಯಿಂದ 3.30 ರ ತನಕ ನಡೆಯಿತು.

ಅಸ್ಸೈದ್ ಜಾಫರ್ ಅಸ್ಸಖಾಫ್ ತಂಗಳ್ ರವರ ದುವಾದ ಮೂಲಕ ಸಭೆಯು ಆರಂಭವಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಸ್ವಾಗತಿಸಿ ಸಭೆಯ ಉದ್ದೇಶ ಮತ್ತು ಮುಸ್ಲಿಂ ಜಮಾಅತ್ತ್ ಅನಿವಾರ್ಯತೆಯನ್ನು ವಿವರಿಸಿದರು. ರಾಜ್ಯ ನಾಯಕ ಅಬ್ರುರ್ರಹಮಾನ್ ರಝ್ವಿ ಕಲ್ಕಟ್ಟ ತಾಲ್ಲೂಕು ಸಮಿತಿಗಳ ಅಭಿವೃದ್ಧಿಯ ಅವಲೋಕನ ನಡೆಸಿದರು.
ಜಿಲ್ಲೆಯ ಆರು ತಾಲ್ಲೂಕುಗಳ ನಾಯಕರಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿರುವ ಸದಸ್ಯತನ ಅಭಿಯಾನ ಮತ್ತು ಯುನಿಟ್ ಸಮಿತಿಯ ರಚನೆಯ ಬಗ್ಗೆ ಮಾಹಿತಿ ಪಡೆಯಲಾಯಿತು.


ಜಿಲ್ಲಾ ಉಪಾಧ್ಯಕ್ಷರುಗಳಾದ ಮುಸ್ತಫಾ ಸಅದಿ ಮೂಳೂರ್ YBC ಬಶೀರ್ ಆಲಿ ಮೂಳೂರು ಮುಹಮ್ಮದ್ ನಯೀಮ್ ಕಟಪಾಡಿ ನಾಸಿರ್ ಶೇಕ್ ಕಾರ್ಕಳ ಆಬು ಮುಹಮ್ಮದ್ ಕುಂದಾಪುರ ಅಬ್ದುಲ್ ಹಮೀದ್ ಮೂಳೂರ್ ಜಿಲ್ಲಾ ಕಾರ್ಯಾಧ್ಯಕ್ಷ K. P ಇಬ್ರಾಹಿಂ ಮಟಪಾಡಿ ಮುಸ್ಲಿಂ ಜಮಾಅತ್ತ್ ನ ಅಭಿವೃದ್ಧಿಯ ಬಗ್ಗೆ ಸಲಹೆ ನೀಡಿದರು.
ಮುಂದಿನ 15 ದಿನಗಳಲ್ಲಿ ಜಿಲ್ಲೆಯ ಎಲ್ಲಾ ಮೊಹಲ್ಲಾಗಳಲ್ಲಿ ಮುಸ್ಲಿಂ ಜಮಾಅತ್ತ್ ನ ಯುನಿಟ್ ರಚಿಸುವ ಬಗ್ಗೆ ಬಂದಂತಹ ವಿವಿಧ ಮೊಹಲ್ಲಾದ ನಾಯಕರಿಗೆ ಜವಾಬ್ದಾರಿ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ವೈ. ಎಮ್ ಇಲ್ಯಾಸ್ ಕಟಪಾಡಿ KSM ಮನ್ಸೂರ್ ಉಡುಪಿ ಮುಹಮ್ಮದ್ ಸುಲ್ತಾನ್ ಬೈಂದೂರು ತಾಲ್ಲೂಕು ಅಧ್ಯಕ್ಷರುಗಳಾದ YBC ಮುಸ್ತಫಾ ಸಖಾಫಿ J.ಮುಷ್ತಾಕ್ ಆಹ್ಮದ್ ಹೊನ್ನಾಳ ಇಲ್ಯಾಸ್ ನಾವುಂದ ಅಜ್ಮಲ್ ಶೀರೂರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳ ನಾಯಕರು ಹಾಜರಿದ್ದರು. ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಜನ್ಸಾಲೆ ಧನ್ಯವಾದ ಸಮರ್ಪಿಸಿದರು. ಮೂರು ಸ್ವಲಾತ್ ನೂಂದಿಗೆ ಸಭೆಯನ್ನು ಮುಗಿಸಲಾಯಿತು.