ಡೈಲಿ ವಾರ್ತೆ:05 ಜೂನ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಆಯನೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ – ನವರತ್ನ ಬಾರ್ & ರೆಸ್ಟೋರೆಂಟ್ ಕ್ಯಾಶಿಯರ್ ನ ಹತ್ಯೆ!

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಆಯನೂರು ನವರತ್ನ ಬಾರ್ & ರೆಸ್ಟೋರೆಂಟ್ ನಲ್ಲಿ ಕ್ಯಾಶಿಯರ್ ಸಚಿನ್ ಮೇಲೆ ಡ್ರಾಗರ್ ಬಳಸಿ ಹಲ್ಲೆ ಮಾಡಿ ಕೊಲೆಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ನವರತ್ನ ಬಾರ್ & ರೆಸ್ಟೋರೆಂಟ್ ನಲ್ಲಿ ಕುಡಿಯಲು ಬಂದ ಮೂವರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ 112 ಪೊಲೀಸರ ಎದುರಿನಲ್ಲೇ ಕ್ಯಾಶಿಯರ್ ಸಚಿನ್ ಅವರ ಮೇಲೆ ಡ್ರಾಗರ್ ಯಿಂದ ಚುಚ್ಚಿ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.



ಗಂಭೀರ ಗಾಯಗೊಂಡ ಸಚಿನ್ ಅವರನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಆದರೆ ಚಿಕಿತ್ಸೆ ಪಲಕಾರಿಯಾಗದೆ ರಾತ್ರಿ 11:30 ರ ಸುಮಾರಿಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಆರೋಪಿಗಳು ಸ್ಥಳೀಯ ನಿರಂಜನ್, ಸತೀಶ್, ಅಶೋಕ್ ನಾಯ್ಕ್ ಎಂದು ಗುರುತಿಸಲಾಗಿದ್ದು ಇವರು ತಲೆಮರಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.