ಡೈಲಿ ವಾರ್ತೆ:11 ಆಗಸ್ಟ್ 2023

ಕುಂದಾಪುರ ವ್ಯಾಪ್ತಿಯ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಪದ ಬಳಕೆಗೆ ವಿಠಲವಾಡಿ ಕನ್ನಡ ಅಭಿಮಾನಿಗಳಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸದೇ ಆಂಗ್ಲ (ಇಂಗ್ಲೀಷ್), ಇನ್ನಿತರ ಭಾಷೆಗಳಲ್ಲಿ ಅಂಗಡಿ ನಾಮಫಲಕಗಳು ಕಂಡು ಬರುತ್ತಿದ್ದು ಅದನ್ನು ತೆರವುಗೊಳಿಸಬೇಕು ಅಥವಾ ಅದರೊಂದಿಗೆ ಕನ್ನಡದ ನಾಮಫಲಕಗಳನ್ನು ಕನ್ನಡ ರಾಜ್ಯೋತ್ಸವದ ಒಳಗೆ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಕುಂದಾಪುರ ವಿಠಲವಾಡಿ ಕನ್ನಡ ಅಭಿಮಾನಿಗಳು ಆ. 11 ರಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಹೆಚ್ ಮಂಜುನಾಥ ಇವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿಮಾನಿಗಳ ಸಂಘದ ದಿನೇಶ ಪುತ್ರನ್ ವಿಠಲವಾಡಿ, ನಿತಿನ್ ವಿಠಲವಾಡಿ, ಹರ್ಷೀತ್ ವಿಠಲವಾಡಿ, ಗಿರೀಶ್ ಜಿ.ಕೆ ಪುರಸಭೆ ಸದಸ್ಯರು, ಹಾಗೂ ಕನ್ನಡ ಅಭಿಮಾನಿ ಸಂಘದ ಪದಾದಿಕಾರಿಗಳು ಉಪಸ್ಥಿತರಿದ್ದರು.