ಡೈಲಿ ವಾರ್ತೆ:17 ಸೆಪ್ಟೆಂಬರ್ 2023

ಯಡಾಡಿ – ಮತ್ಯಾಡಿ ಗ್ರಾಮದ ಗುಡ್ಡಟ್ಟುಗೆ ಸರಕಾರಿ ಸಾರಿಗೆ ಬಸ್ ಚಾಲನೆ

ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಇಲ್ಲಿಗೆ ಸರಕಾರಿ ಸಾರಿಗೆ ಬಸ್ಸಿನ ವ್ಯವಸ್ಥೆ ಇಂದು ಗುಡ್ಡಟ್ಟು ವಿನಾಯಕ ದೇವಸ್ಥಾನದಲ್ಲಿ ಕುಂದಾಪುರ ಘಟಕದ ವ್ಯವಸ್ಥಾಪಕರು ಬಸವ ತಿಮಪ್ಪ (BT)ನಾಯ್ಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ವಿಭಾಗಿಯ ಯಾಂತ್ರಿಕ ಅಭಿಯಂತರರಾದ ಜಯ ಕುಮಾರ್, ಘಟಕ ಸಿಬ್ಬಂದಿ ಉದಯ ಶೆಟ್ಟಿ, ಸಂಚಾರಿ ನಿಯಂತ್ರಕರಾದ ಚಂದ್ರಶೇಖರ್, ರಮೇಶ ಪೂಜಾರಿ, ಮಾಜಿ ಸಂಚಾರಿ ಅದಿಕ್ಷಕರಾದ ಸತ್ಯನಾರಾಯಣ ಕೆದ್ಲಾಯ, ಚಾಲಕ ಸಂದೇಶ, ನಿರ್ವಾಹಕ ರಾಜು ಜಾದವ್, ಗ್ರಾಮ ಪಂಚಾಯತಿ ಸದಸ್ಯ ಉದಯ ಯಡಾಡಿ, ಸಮಾಜಿಕ ಕಾರ್ಯಕರ್ತ ದಿನೇಶ ಪುತ್ರನ್ ವಿಠಲವಾಡಿ, ದೇವಾಸ್ಥಾನದ ಧರ್ಮದರ್ಶಿ ಅನಂತ ಪದ್ಮನಾಭ ಅಡಿಗ, ಪುರೋಹಿತರಾದ ಶಂಕರ ಅಡಿಗ ಗುಡ್ಡಟ್ಟು,ಗಂಗಾಧರ ಅಡಿಗ ಗ್ರಾಮಸ್ಥರಾದ ಸತೀಶ ಅಡಿಗ ಮತ್ಯಾಡಿ ವಿಜಯ ಕುಮಾರ ವಿಠಲವಾಡಿ,ಮಂಜುನಾಥ ಮತ್ಯಾಡಿ,ಕುಶಾ ಪುಜಾರಿ ಗುಡ್ಡೆಯಂಗಡಿ, ವಿಜಯ ಮೊಗವೀರ ಯಡಾಡಿ, ವಿನೋದ ಮೊಗವೀರ ಯಡಾಡಿ, ವೆಂಕಟ ಗುಡ್ಡೆಯಂಗಡಿ ಉಪಸ್ಥಿತರಿದ್ದರು.
ಬಸ್ಸಿನ ಸಮಯವನ್ನು ಬದಲಾಯಿಸಬೇಕು ಎಂದು ಆ ಸಂದರ್ಭದಲ್ಲಿ ಸ್ಥಳೀಯರು ಒತ್ತಾಯಿಸಲಾಯಿತು.