ಡೈಲಿ ವಾರ್ತೆ: 17/ಜೂ./2024

ನನ್ನ ಬಿಟ್ಟುಬಿಡಿ ಸರ್ ಪ್ಲೀಸ್.. ಅಂತಾ ಪೊಲೀಸರ ಕಾಲು ಹಿಡಿದ ನಟ ದರ್ಶನ್!

ದರ್ಶನ್ ಅಹಂಕಾರ ಮಣ್ಣಲ್ಲಿ ಮಣ್ಣಾಗಿ ಹೋಗಿದೆ, ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿರುವ ಈ ನಟ ಈಗ ಸೈಲೆಂಟ್ ಆಗಿದ್ದಾನೆ. ಅದರಲ್ಲೂ ರೇಣುಕಾಸ್ವಾಮಿ ಕೊಲೆ ಆರೋಪ ಹಿನ್ನೆಲೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಕೊಲೆಯಲ್ಲಿ ದರ್ಶನ್ ಪಾತ್ರ ದೊಡ್ಡದಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿದೆ ಎಂಬ ಆರೋಪಗಳ ನಡುವೆ ಇದೀಗ ದರ್ಶನ್ ಪೊಲೀಸರ ಕಾಲು ಹಿಡಿದ್ದಾರಂತೆ!

ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಮಾಡಿದೆ ಎಂದು ಆರೋಪ ಕೇಳಿಬಂದ ನಂತರ. ಈ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 1 ವಾರದಿಂದ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಸತ್ಯ ಒಪ್ಪಿಕೊಳ್ಳಲು ಈತ ಸಿದ್ಧವೇ ಇಲ್ಲ. ಆದರೆ ಪೊಲೀಸರು ದರ್ಶನ್‌ಗೆ ಏನ್ ಮಾಡ್ತಿದ್ದಾರೆ ಗೊತ್ತಾ!

ಪೊಲೀಸರಿಂದ ದರ್ಶನ್‌ಗೆ ಕ್ಲಾಸ್! ಏನೇ ಕೇಳಿದರೂ ನನಗೆ ಗೊತ್ತೇ ಇಲ್ಲ ನನಗೆ ಗೊತ್ತೇ ಇಲ್ಲ ಅಂತಿದ್ದಾನೆ. ಆದರೆ ದರ್ಶನ್ ಸೊಕ್ಕು, ಅಹಂಕರಾದ ಮಾತು ಕರಗಿಸಿರುವ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರ ಸಿಟ್ಟು ನೋಡಿ ದರ್ಶನ್ ಬೆಚ್ಚಿಬಿದ್ದು, ಈಗ ಪೊಲೀಸರ ಕಾಲು ಹಿಡಿಯಲು ಹೋದ ಘಟನೆ ವರದಿ ಆಗಿದೆ. ‘ಸರ್ ನನ್ನದು ತಪ್ಪಾಯ್ತು, ಸರ್ ನನ್ನ ಬಿಟ್ಟುಬಿಡಿ‘ ಅಂತಾ ನಟ ದರ್ಶನ್ ನೇರವಾಗಿ ಪೊಲೀಸರ ಕಾಲು ಹಿಡಿಯಲು ಹೋಗಿದ್ದಾನಂತೆ!

ಏಯ್.. ಏನೋ ಇದು ನಿಂದು!! ಪೊಲೀಸರು ಕೊಲೆ ಆರೋಪಿಗಳಿಗೆ ಮರ್ಯಾದಿ ಕೊಡುವುದೇ ಇಲ್ಲ, ಯಾಕಂದ್ರೆ ಕೊಲೆಗಡುಕರ ಬಳಿ ಸಮಾಧಾನ & ಶಾಂತ ರೀತಿಯಲ್ಲಿ ವರ್ತಿಸಿದರೆ ಸತ್ಯ ಹೊರಗೆ ಬರುವುದೇ ಇಲ್ಲ. ಆದರೂ, ಕೊಲೆ ಆರೋಪಿ ನಟ ದರ್ಶನ್ ಬಳಿ ಪೊಲೀಸರು ಸ್ವಲ್ಪ ಸಮಾಧಾನವಾಗಿ ಇದ್ದರು. ಹೀಗಿದ್ದರೂ ದರ್ಶನ್ ಮಾತ್ರ ತನ್ನ ವರಸೆ ಬದಲಾಯಿಸಿಲ್ಲ, ಹೀಗಾಗಿ ಇದೀಗ ಪೊಲೀಸರು ರೊಚ್ಚಿಗೆದ್ದಿದ್ದಾರೆ. ತಮ್ಮದೇ ಶೈಲಿಯಲ್ಲಿ ನಟ ದರ್ಶನ್‌ಗೆ ಸತ್ಯ ಹೇಳು ಅಂತಿದ್ದಾರೆ. ಪೊಲೀಸರ ಖಡಕ್ ಮಾತನ್ನು ಕೇಳಿ ಬೆಚ್ಚಿಬಿದ್ದಿರುವ ಕೊಲೆ ಆರೋಪಿ ದರ್ಶನ್, ಸರ್ ನನ್ನಿಂದ ತಪ್ಪಾಗಿದೆ ಬಿಟ್ಟುಬಿಡಿ ಪ್ಲೀಸ್ ಅಂತಾ ಕಾಲು ಹಿಡಿಯಲು ಹೋದನಂತೆ. ಆಗ ಪೊಲೀಸರು, ಏನೋ ನೀನು ಇಷ್ಟು ದಿನ ಬರೀ ಸುಳ್ಳು ಹೇಳ್ತಾ ಇದ್ದೆ ಯಾಕೋ? ಅಂತಾ ಪ್ರಶ್ನೆ ಮಾಡಿದ್ದಾರಂತೆ, ಅಲ್ಲದೆ ಕೊಲೆ ಆರೋಪದಲ್ಲಿ ನಿನ್ನ ಪಾತ್ರದ ಬಗ್ಗೆ ಎಲ್ಲಾ ರೀತಿಯ ಸಾಕ್ಷ್ಯ ಇದೆ ಎಂದು ಪೊಲೀಸರು ದರ್ಶನ್‌ಗೆ ತಿಳಿಸಿದ್ದಾರಂತೆ.