ಡೈಲಿ ವಾರ್ತೆ: 17/ಜೂ./2024

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಚಿಕ್ಕಣ್ಣ ಮನೆಗೆ ನೋಟಿಸ್ ಅಂಟಿಸಿದ ಪೊಲೀಸ್!

ರೇಣುಕಾ ಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಹಾಸ್ಯ ನಟ ಚಿಕ್ಕಣ್ಣಗೂ ಸಂಕಷ್ಟ ಶುರುವಾಗಿದೆ. ರೇಣುಕಾ ಸ್ವಾಮಿ ಕೊಲೆಗೂ ಮುನ್ನ ದರ್ಶನ್ ಚಿಕ್ಕಣ್ಣ ಜೊತೆ ಪಾರ್ಟಿ ಮಾಡಿದ್ರು. ಹೀಗಾಗಿ ಹಾಸ್ಯ ನಟ ಚಿಕ್ಕಣ್ಣ ಕೂಡ ವಿಚಾರಣೆ ಎದುರಿಸಲೇಬೇಕಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಆರ್​ಆರ್​ ನಗರದಲ್ಲಿರುವ ನಟ ಚಿಕ್ಕಣ್ಣ ಮನೆಗೆ ತೆರಳಿ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದಾರೆ

ವಿಚಾರಣೆಗೆ ಬರುವಂತೆ ಕರೆ ಮಾಡಿದ್ದ ಪೊಲೀಸರು!ಬೆಳಗ್ಗೆಯೇ ಚಿಕ್ಕಣ್ಣ ಅವರಿಗೆ ಕರೆ ಮಾಡಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ರು, ​ಈ ವೇಳೆ ನನಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ನಟ ಚಿಕ್ಕಣ್ಣ ಕೇಳಿಕೊಂಡಿದ್ದಾರೆ. ಆದ್ರೆ ಪೊಲೀಸರು ಇಂದೇ ವಿಚಾರಣೆ ಹಾಜರಾಗುವಂತೆ ಹೇಳಿದ್ದಾರೆ.

ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್: ಚಿಕ್ಕಣ್ಣ ಮನೆ ಬಾಗಿಲು ಬಡಿದ ಪೊಲೀಸರು ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ನೊಟೀಸ್ ನೀಡಿದ ಬಳಿಕವೂ ಚಿಕ್ಕಣ್ಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರು ಮನೆಗೆ ತೆರಳಿದ ವೇಳೆ ಚಿಕ್ಕಣ್ಣ ಮನೆಯಲ್ಲಿ ಇರಲಿಲ್ಲ. ಆದರೆ ಇಂದೇ ಹಾಸ್ಯ ನಟ ಚಿಕ್ಕಣ್ಣ ಸವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಸ್ಟೋನಿ ಬ್ರೂಕ್‌ ಪಬ್​ನಲ್ಲಿ ಪಾರ್ಟಿ! ಜೂನ್‌ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ದರ್ಶನ್ ಅಂಡ್​ ಗ್ಯಾಂಗ್ ಶೆಡ್​​ನಲ್ಲಿ ಆತನನ್ನು ಕೊಂದು ಹಾಕಿದ್ರು. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವುದಕ್ಕೂ ಮುನ್ನ ನಟ ದರ್ಶನ್‌, ಆರ್​ಆರ್​ ನಗರದಲ್ಲಿರುವ ಸ್ಟೋನಿ ಬ್ರೂಕ್‌ ಎಂಬ ಪಬ್​ನಲ್ಲಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಪಾರ್ಟಿ ವೇಳೆ ನಡೆದಿತ್ತಾ ರೇಣುಕಾಸ್ವಾಮಿ ಹತ್ಯೆ ಚರ್ಚೆ! ಪಬ್​ನಲ್ಲಿ ನಡೆದ ಪಾರ್ಟಿ ಮಾಡುವ ಸಂದರ್ಭದಲ್ಲಿ ದರ್ಶನ್‌ ಅಂಡ್ ಗ್ಯಾಂಗ್​ ರೇಣುಕಾ ಸ್ವಾಮಿ ಬಗ್ಗೆ ಮಾತನಾಡಿದ್ದರಾ? ಆತನನ್ನು ಕಿಡ್ನ್ಯಾಪ್ ಬಳಿಕ ಮುಂದಿನ ಪ್ಲಾನ್‌ ಬಗ್ಗೆ ಹೇಳಿದ್ದರಾ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಚಿಕ್ಕಣ್ಣ ಅವರನ್ನು ವಿಚಾರಣೆ ನಡೆಸಿದರೆ ಏನಾದರೂ ಮಾಹಿತಿ ನೀಡಬಹುದು ಎಂಬ ಉದ್ದೇಶದಿಂದ ಹಾಸ್ಯನಟನಿಗೂ ನೋಟಿಸ್‌ ನೀಡಲಾಗಿದೆ.