ಡೈಲಿ ವಾರ್ತೆ: 24/ಜುಲೈ /2024

ಗುಡಿಬಂಡೆ: ಬೆಳ್ಳಂಬೆಳಗ್ಗೆ ತಂದೆ ಮತ್ತು ಮಗನ ಮೇಲೆ ಶೂಟ್ ಔಟ್ – ಓರ್ವ ಸಾವು, ಇನ್ನೊರ್ವ ಗಂಭೀರ

ಚಿಕ್ಕಮಗಳೂರು: ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ನಿವಾಸಿ ನಜೀರ್ ಮತ್ತು ಆತನ ತಂದೆ ಬಾಬು ಸಾಬಿ ಎಂಬವರ ಮೇಲೆ ಬಾಬು ಸಾಬಿ ಅವರ ತಮ್ಮ ಶೂಟ್ ಮಾಡಿದ್ದು, ಲಾಂಗ್ ಗಳಿಂದ ಹಲ್ಲೆ ಮಾಡಿರುವ ಕಾರಣ ಓರ್ವ ಸಾವನ್ನಪ್ಪಿದ್ದು ಇನ್ನೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ನಡೆದಿದೆ.

ನಜೀರ್ ಮತ್ತು ಬಾಬು ಸಾಬಿ ಎಂದಿನಂತೆ ಬೆಳಿಗ್ಗೆ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದಾಗ ಬಾಬು ಸಾಬಿ ಅವರ ತಮ್ಮ ಗನ್ ನಲ್ಲಿ ಶೂಟ್ ಮಾಡಿದ್ದು, ಇದರಿಂದ ನಜೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾಬು ಸಾಬಿ ಮೇಲೆ ಲಾಂಗ್ ಗಳಿಂದ ಹಲ್ಲೆ ಮಾಡಿರುವ ಕಾರಣ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಹೆಚ್ಚಿನ ಚಿಕಿತ್ಸೆ ಸಿಗದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು, ಗಾಯಾಳು ಬಾಬು ಸಾಬಿ ತೀರ್ವ ವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.