ಡೈಲಿ ವಾರ್ತೆ: 08/ಆಗಸ್ಟ್/2024

ಬಂಟ್ವಾಳ : ಆ.11 ರಂದು ಮಡಿವಾಳ ಸಮಾಜ ಬಾಂಧವರ ಕೆಸರ್‌ಡೊಂಜಿ ದಿನ ಕಾರ್ಯಕ್ರಮ.

ಬಂಟ್ವಾಳ : ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಕಂದೂರು ಹಾಗೂ ಬಂಟ್ವಾಳ ಮಡಿವಾಳ ಯುವ ಬಳಗ ಮತ್ತು ಬಂಟ್ವಾಳ ಮಹಿಳಾ ಘಟಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಇವರ ಸಹಕಾರದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಡಿವಾಳ ಸಮಾಜ ಬಾಂಧವರ ಕೆಸರು ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಆಗಸ್ಟ್ 11ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದ ಬಳಿ ನಡೆಯಲಿದೆ ಎಂದು ತಾಲೂಕು ಸಂಘದ ಗೌರವ ಸಲಹೆಗಾರ ಪುಷ್ಪರಾಜ್ ಕುಕ್ಕಾಜೆ ಹೇಳಿದರು.

ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ಜಿಲ್ಲೆಯಿಂದ ಸುಮಾರು 2೦೦೦ ಮಡಿವಾಳ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ. ಎನ್. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

  ವಿಶೇಷ ಸಾಧನೆ ಮಾಡಿದ ಭಾರತೀಯ ಭೂಸೇವೆ ನಿವೃತ್ತ ಸುಬೇದಾರ್ ಜೂನಿಯರ್ ಕಮಿಷನರ್ ಆಫೀಸರ್ ಉಮೇಶ್ ಸಾಲಿಯಾನ್ ಹಿರಿಯಡ್ಕ, ಚಿತ್ರ ನಟ ಶನಿಲ್‌ಗುರು ಬಂಟ್ವಾಳ, ಭಾಸ್ಕೆಟ್‌ಬಾಲ್ ಕ್ರೀಡಾಪಡು ಸಂಕೇತ್ ಎಸ್. ಹೊಸಬೆಟ್ಟು ಇವರನ್ನು ಸನ್ಮಾನಿಸಲಾಗುವುದು,  

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 4೦ ಗಣ್ಯರು ಭಾಗವಹಿಸಲಿದ್ದು ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಮಂಕುಡೆ , ಗೌರವಾಧ್ಯಕ್ಷ ಎನ್.ಕೆ. ಶಿವ ನಂದಾವರ, ಮಡಿವಾಳ ಯುವ ಬಳಗದ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಂಜಿಕಲ್ಲು ಉಪಸ್ಥಿತರಿದ್ದರು .