ಡೈಲಿ ವಾರ್ತೆ: 18/Sep/2024

ಗೋಪಾಡಿ: ಸಮುದ್ರದ ಅಲೆಗೆ ದಡ ಸೇರಿದ ಎರಡು ಮೀನುಗಾರಿಕೆ ಬೋಟ್

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಗೋಪಾಡಿ ಚರಕೀಕಡು ಎಂಬಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಬೋಟಿನ ತಾಂತ್ರಿಕ ದೋಷ ದಿಂದಾಗಿ ಸಮುದ್ರದ ಅಲೆಗೆ ಎರಡು ಫಿಶಿಂಗ್ ಬೋಟ್ ದಡ ಸೇರಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಪಾರಂಪಳ್ಳಿಯ ತೇಜು ಪೂಜಾರಿ ಯವರ ಮಾಲಕತ್ವದ ಜಲಸಾಗರ ಹಾಗೂ ಜಲಜನನಿ ಹೆಸರಿನ ಎರಡು ಬೋಟ್ ದಡಕ್ಕೆ ಅಪ್ಪಲಿಸದೆ. ಅದೃಷ್ಟಾತ್ ಮೀನುಗಾರರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಕರಾವಳಿ ಕಾವಲು ಪಡೆ ಗಂಗೊಳ್ಳಿ ಠಾಣೆಯ. ಪಿಎಸ್ಐ ಸುಬ್ರಹ್ಮಣ್ಯ. ಹಾಗೂ ಏಎಸ್ಐ ಭಾಸ್ಕರ್. ಹಾಗೂ ಕೆಎನ್‌ಡಿ ಸಿಬ್ಬಂದಿಗಳು. ಬೇಟಿ ನೀಡಿರುತ್ತಾರೆ