ಡೈಲಿ ವಾರ್ತೆ: 03/OCT/2024

ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣ

ಸಾಲಿಗ್ರಾಮ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮಹಿಳಾ ಬಳಗದವರಿಂದ ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಇಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರತೀದಿನ ನಡೆಯಲಿರುವ
ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣಕ್ಕೆ ಶ್ರೀ ಭಗವತೀ ಅಮ್ಮನವರ ದೇವಸ್ಥಾನದ ಅರ್ಚಕ ವೇದ ಮೂರ್ತಿ ಶ್ರೀ ರಾಮದಾಸ ಅಡಿಗ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಶ್ರೀ ಭಗವತೀ ಅಮ್ಮನವರ ದೇವಳದ ಆಡಳಿತದ ಸದಸ್ಯ ಶ್ರೀ ಜಿ. ಕಾಶೀ ಮೈಯ್ಯ ರು ಸ್ವಾಗತಿಸಿದರು. ಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ, ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಶ್ರೀ ಉದಯಕುಮಾರ
ಮೈಯ್ಯ, ಶ್ರೀ ಜಿ. ವೆಂಕಟೇಶ ಮೈಯ್ಯ ಮತ್ತಿತರರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಶ್ರೀ ಕೆ. ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು. ನವರಾತ್ರಿಯ ಒಂಬತ್ತು ದಿನಗಳಲ್ಲಿ ಸಂಜೆ ಗಂಟೆ 5 ರಿಂದ ಶ್ರೀ ದೇವಳದಲ್ಲಿ ವಲಯದ ವಿಪ್ರ ಮಹಿಳೆಯರಿಂದ ಪಾರಾಯಣ ಸೇವೆ ನಡೆಯಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.