ಡೈಲಿ ವಾರ್ತೆ: 03/OCT/2024

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಪಿತೃ ತಪ೯ಣ ಕಾರ್ಯಕ್ರಮ

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಮಹಾ ವಿಷ್ಣು ವೈದಿಕ ಮಂದಿರ ಶ್ರೀ ಭಟ್ ಮಾಣಿ ದೇವಸ್ಥಾನ ಗುಂಡ್ಮಿ ಇವರ ಸಹಕಾರದೊಂದಿಗೆ ದಿನಾಂಕ 02/10/2024 ಬುಧವಾರ ದಂದು ನಡೆದ ಪಿತೃ ತಪ೯ಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವೇದಮೂರ್ತಿ ಶ್ರೀ ಸಿ. ಮಂಜುನಾಥ ಉಪಾಧ್ಯ ಹಾಗೂ ಶ್ರೀ ಕಾರ್ತಿಕ್ ಗುಂಡ್ಮಿ ಇವರು ಪಿತೃ ತಪ೯ಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅನೇಕ ಮಂದಿ ಪಿತೃ ತಪ೯ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇ.ಮೂ. ಮಂಜುನಾಥ ಉಪಾಧ್ಯರು ಮಹಾಲಯ ಪಕ್ಷದಲ್ಲಿ ಪಿತೃ ತಪ೯ಣ ನೀಡುವುದರ ಮಹತ್ವವನ್ನು ತಿಳಿಸಿದರು.


ಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ, ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಶ್ರೀ ಸುಬ್ರಾಯ ಉರಾಳ, ಕೋಶಾಧಿಕಾರಿ ಶ್ರೀ ಸುಬ್ರಹ್ಮಣ್ಯ ಹೇಳೆ೯ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು.