

ಡೈಲಿ ವಾರ್ತೆ: 11/ಮಾರ್ಚ್ /2025


ಬ್ರಹ್ಮಾವರ ತಾಲೂಕು ಸರಕಾರಿ ಗ್ರೇಡ್ 01 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆ

ಬ್ರಹ್ಮಾವರ: ಕೇಂದ್ರ ಚುನಾವಣಾಧಿಕಾರಿಗಳು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಬೆಂಗಳೂರು ಇವರ ಚುನಾವಣಾ ಅಧಿಸೂಚನೆಯಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ( ರಿ ) ಬೆಂಗಳೂರು ಈ ಸಂಘದ ಬೈಲಾ ನಿಯಮಾವಳಿ ಪ್ರಕಾರ ಬ್ರಹ್ಮಾವರ ತಾಲೂಕು ಘಟಕದ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಚುನಾವಣೆಯಲ್ಲಿ ಬ್ರಹ್ಮಾವರ ತಾಲೂಕು ಸಂಘದ ಅಧ್ಯಕ್ಷರಾಗಿ ಸರಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢ ಶಾಲಾ ವಿಭಾಗ ) ಮಣೂರು ಪಡುಕರೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಉಪಾಧ್ಯಕ್ಷರಾಗಿ ಶ್ರೀ ಶಶಿಕಾಂತ ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢ ಶಾಲಾ ವಿಭಾಗ) ಕರ್ಜೆ, ಕಾರ್ಯದರ್ಶಿಯಾಗಿ ಕೃಷ್ಣ ನಾಯಕ್ ಎನ್ ಸರಕಾರಿ ಪ್ರೌಢ ಶಾಲೆ ನಾಲ್ಕೂರು ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಸರಕಾರಿ ಪ್ರೌಢ ಶಾಲೆ ಹೈಕಾಡಿ, ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿ ಖಜಾಂಜಿಯಾಗಿ ಶ್ರೀಮತಿ ಅಕ್ಷತಾ ಸರಕಾರಿ ಪ್ರೌಢ ಶಾಲೆ ಜಾನುವಾರುಕಟ್ಟೆ ಆಯ್ಕೆಯಾಗಿದ್ದು ಬ್ರಹ್ಮಾವರ ಕ್ಷೇತ್ರದ ಚುನಾವಣಾಧಿಕಾರಿ ನಾಲ್ಕೂರು ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀ ಕೃಷ್ಣ ನಾಯಕ್ ಕೆ ಇವರು ಈ ಮೇಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟಿರುತ್ತಾರೆ.