
ಡೈಲಿ ವಾರ್ತೆ: 15/ಜುಲೈ/2025
ಮಡಿಲು ಸೇವಾ ತಂಡದ ವಾರ್ಷಿಕ ಮಹಾಸಭೆ ಕಾರ್ಯಕ್ರಮ

ಮಡಿಲು ಸೇವಾ ತಂಡದ ವಾರ್ಷಿಕ ಮಹಾಸಭೆಯು ಜು. 12 ರಂದು ನಾಗುರಿಯ ಸಾಯಿ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ತಂಡದ ಗೌರವ ಅಧ್ಯಕ್ಷರಾದ ಪುಷ್ಪಲತಾ ಸುವರ್ಣ, ಅಧ್ಯಕ್ಷರಾದ ಗಜೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಉಷಾ ವಿಶ್ವನಾಥ್, ಕಾರ್ಯದರ್ಶಿ ಕೆ. ಪಿ ಬಾಲಚಂದ್ರ, ಜೊತೆ ಕಾರ್ಯದರ್ಶಿ ನಿತ್ಯಾನಂದ ಪಡೀಲ್, ಕೋಶಧಿಕಾರಿ ಅನುಸೂಯ ಸಚಿನ್ , ಸಂಫಟನ ಕಾರ್ಯದರ್ಶಿ ಸುಧೀರ್ ಅಳಪೆ, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
ಮಡಿಲು ಸೇವಾ ತಂಡದ ವರ್ಷಾಚರಣೆಯ ಪ್ರಯುಕ್ತ ಅಶಕ್ತ 20 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಯೋಗ ಶಿಕ್ಷಕಿ ಲೀಲಾ ಸ್ವಾಗತಿಸಿ ಕೆ. ಪಿ ಬಾಲಚಂದ್ರ ನಿರೂಪಿಸಿದರು…