


ಡೈಲಿ ವಾರ್ತೆ: 10/ಸೆ./2025


ಬೈಂದೂರು : ಅಂಬೇಡ್ಕರ್ ಮಹಿಳಾ ಸಂಘ ( ರಿ ) ವತಿಯಿಂದ 4 ವಿದ್ಯಾರ್ಥಿಗಳನ್ನು ಸ್ವೀಕಾರ

ಬೈಂದೂರು : ಅಂಬೇಡ್ಕರ್ ಮಹಿಳಾ ಸಂಘ ( ರಿ ) ವತಿಯಿಂದ ಅಕ್ಷರ ಬೆಳಕು ಕಾರ್ಯಕ್ರಮದಲ್ಲಿ ರತ್ತು ಬಾಯಿ ಜನತಾ ಪ್ರೌಢಶಾಲೆಯ 4 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಇಲ್ಲಿನ ವೈದ್ಯೆ ಡಾ ನಿವೇದಿತಾ ಮಕ್ಕಳಿಗೆ ಆರೋಗ್ಯ ಮಾಹಿತಿಯನ್ನು ನೀಡಿದರು.

ಅಂಬೇಡ್ಕರ್ ಮಹಿಳಾ ಸಂಘ ( ರಿ )ಬೈಂದೂರು ಅಧ್ಯಕ್ಷೆ ಸುಶೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ದ.ಸಂ.ಸ. (ರಿ ) ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಆನಂದ್ ಮದ್ದೋಡಿ, ತಾಲೂಕು ಸಂಚಾಲಕರಾದ ಶಿವರಾಜ್ ಬೈಂದೂರು, ವಿನಯ , ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸುರೇಶ್, ಸುರೇಶ್ ಕುಮಾರ್ ಬಾರ್ಕೂರು, ಮಹಿಳಾ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಆನಂದ್ ಮದ್ದೋಡಿ ಸ್ವಾಗತಿಸಿದರು. ಶಿಕ್ಷಕಿ ಚೈತ್ರ ಕಾರ್ಯಕ್ರಮ ನಿರ್ವಹಿಸಿದರು. ಶಕಿಲಾ ವಂದಿಸಿದರು.