ಡೈಲಿ ವಾರ್ತೆ: 31/ಅ./2025

ರಸ್ತೆಗೆ ಕಸ ಸುರಿಯುತ್ತಿದ್ದಾಗಲೇ ಸಿಕ್ಕಿಬಿದ್ದ ಯುವಕ| ನಗರ ಸಭೆ ಸಿಬ್ಬಂದಿಗೇ ಆವಾಜ್ – ಬೈಕ್‌ ವಶಕ್ಕೆ

ಚಿಕ್ಕಬಳ್ಳಾಪುರ: ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೇ ಕಸದ ರಾಶಿ ಸುರಿಯಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ರಸ್ತೆಗೆ ತಂದು ಕಸ ಸುರಿದ ಯುವಕನ ಬೈಕ್ ವಶಪಡಿಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದು, ದಂಡ ಕಟ್ಟದ ಯುವಕನ ಬೈಕ್​ನ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಗರದ ಕಂದವಾರ ರಸ್ತೆಯಲ್ಲಿ ನಡೆದಿದೆ.

ಬೈಕ್​ನಲ್ಲಿ ಕಸದ ಕವರ್ ತಂದು ರಸ್ತೆಗೆ ಯುವಕ ಸುರಿಯುತ್ತಿದ್ದ ವೇಳೆ ಆ ಬಗ್ಗೆ ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಕಸ ಹಾಕಿದ್ದಕ್ಕೆ ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಯುವಕನ ಆವಾಜ್ ಹಾಕಿದ್ದಾನೆ. ಹೀಗಾಗಿ ಆತನ ಬೈಕ್ ಸೀಜ್​ ಮಾಡಿ ಪಾಠ ಕಲಿಸಲಾಗಿದೆ.