ಡೈಲಿ ವಾರ್ತೆ:19 ಜನವರಿ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಆಟೋ ರಿಕ್ಷಾದ ಮೇಲೆ ಮುರಿದು ಬಿದ್ದ ಮರದ ಕೊಂಬೆ – ತಪ್ಪಿದ ಬಾರಿ ಅನಾಹುತ!

ಸಾಗರ :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಗರಸಭೆ ವ್ಯಾಪ್ತಿಯ ಚಾಮರಾಜಪೇಟೆಯ ಸುಮುಖ ಆಸ್ಪತ್ರೆ ಎದುರಿನಲ್ಲಿ ಆಸ್ಪತ್ರೆಗೆ ಬಂದ ತಾಳಗುಪ್ಪ ಮೂಲದ ಆಟೋ ಪುರುಷು ಎಂಬುವವರು ರೋಗಿಗಳನ್ನು ಕರೆದುಕೊಂಡು ಬಂದಿದ್ದೂ, ದಿಡೀರನೇ ಮರದ ಕೊಂಬೆ ಆಟೋ ಮೇಲೆ ಮುರಿದು ಬಿದ್ದಿದ್ದೂ, ಅದೃಷ್ಟವಷಾತ್ ಯಾವುದೇ ಗಂಭೀರ ಗಾಯವಾಗದೇ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ.

ಲಡ್ಡದ ಮರದ ಕೊಂಬೆಗಳನ್ನು ತೆರವು ಕಾರ್ಯ ಮಾಡದೇ ಇರುವುದು ಸಾಗರ ನಗರಸಭೆಯ ನಿರ್ಲಕ್ಷತನ ಎಂದು ಸಾಗರೀಕರುಗಳು ಗಂಭೀರ ಆರೋಪ ಮಾಡುತ್ತಿರುವುದು ಬೆಳಕಿಗೆ ಬಂದಿದೆ

ಈ ಹಿಂದೆಯೂ ಕೂಡ ಇದೇ ರೀತಿಯ ಅವಘಡ ಸಂಭವಿಸಿರುವುದು ಮಾಸುವ ಮುಂಚೆಯೇ ಇನ್ನೊಂದು ಘಟನೆ ನೆಡೆದಿರುವುದು ಸಾಗರದ ಚಾಮರಾಜಪೇಟೆಯಲ್ಲಿ ಜೀವ ಕೈಯಲ್ಲಿಟ್ಟು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನಗರಸಭೆ ಸೂಕ್ತ ಕ್ರಮಕ್ಕೆ ಸಾಗರೀಕರು ಒತ್ತಾಯಿಸಿದ್ದಾರೆ.