ಡೈಲಿ ವಾರ್ತೆ:31 ಜುಲೈ 2023

ಸೌಜನ್ಯ ಪ್ರಕರಣದ ಸತ್ಯಶೋಧನಾ ವರದಿ: ಪತ್ರಕರ್ತ ವಸಂತ್ ಗಿಳಿಯಾರ್ ಮೇಲೆ ಅವಹೇಳನ- ಮೂವರ ವಿರುದ್ದ ದೂರು ದಾಖಲು!

ಕೋಟ: ಪತ್ರಕರ್ತ ವಸಂತ್ ಗಿಳಿಯಾರ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ್ಯವಾಗಿ ನಿಂಧಿಸಿ,ಮಾನಹಾನಿ ನಡೆಸುತ್ತಿದ್ದ ಮೂವರ ಮೇಲೆ ಕೋಟ ಪೋಲಿಸ್ ಠಾಣೆ ಹಾಗೂ ಉಡುಪಿಯ ಸೆನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಸೌಜನ್ಯ ಪ್ರಕರಣದ ಸತ್ಯ ಶೋಧನಾ ವರದಿಯನ್ನು ಪ್ರಸಾರ ಮಾಡುತ್ತಿದ್ದ ವಸಂತ್ ಗಿಳಿಯಾರ್ ಅವರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಅವ್ಯಾಚ್ಯವಾಗಿ ನಿಂಧಿಸಿ ಸುಳ್ಳು ಸುದ್ದಿಯನ್ನು ಹಂಚಿಕೆ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೋಟ ಪೋಲಿಸರು ಹಾಗೂ ಸೆನ್ ಪೋಲಿಸ್ ನಿರಿಕ್ಷಕರು ಈ ಕುರಿತು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.