ಡೈಲಿ ವಾರ್ತೆ: 19/ಜೂ./2024

ಬಿ. ಸಿ. ರೋಡ್: ಮನೆಯ ಬಾಗಿಲು ಮುರಿದು ಒಳ್ಳ ನುಗ್ಗಿದ ಕಳ್ಳರು- ನಗದು, ಚಿನ್ನಾಭರಣ ಕಳವು

ಬಂಟ್ವಾಳ : ಬಿ.ಸಿ.ರೋಡ್ – ಕೈಕಂಬ ಸಮೀಪದ ಕಾರಂತಕೋಡಿಯ ಮನೆಯೊಂದರ ಬಾಗಿಲು ಮುರಿದು ಒಳ್ಳ ನುಗ್ಗಿದ ಕಳ್ಳರು 30 ಸಾವಿರ ರೂ. ನಗದು ಹಾಗೂ 22 ಸಾವಿರ ರೂ. ಮೌಲ್ಯದ ಆಭರಣಗಳನ್ನು ಕಳವು ಮಾಡಿದ ಘಟನೆ ಜೂ. 18 ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಕಾರಂತಕೋಡಿ‌ ನಿವಾಸಿ ಸಿ.ಶ್ರೀಧರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರು ಜೂ. 17 ರ ಸಂಜೆ ಮಗಳ ಮನೆಗೆ ಹೋಗಿದ್ದು, ಮಂಗಳವಾರ ಬೆಳಗ್ಗೆ ಮನೆಯಲ್ಲಿ ಕಳ್ಳತನ ನಡೆದಿರುವ ಸ್ಥಳೀಯರು ಮಾಹಿತಿ ನೀಡಿದ್ದು, ತಕ್ಷಣ ಅವರು ಮನೆಗೆ ಬಂದು ನೋಡಿದಾಗ ಹಾರೆಯಲ್ಲಿ ಬಾಗಿಲು ಮುರಿದಿರುವುದು ಕಂಡುಬಂದಿದೆ.

ಒಳಗೆ ಹೋಗಿ ನೋಡಿದಾಗ ಕಪಾಟಿನಲ್ಲಿಟ್ಟಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಅದರಲ್ಲಿದ್ದ 30 ಸಾವಿರ ರೂ. ನಗದು, 20 ಸಾವಿರ ರೂ. ಮೌಲ್ಯದ 4 ಗ್ರಾಂ. ಚಿನ್ನದ ಆಭರಣ ಹಾಗೂ 2 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ ಕಳವಾಗಿರುವುದು ಕಂಡುಬಂದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.