ಡೈಲಿ ವಾರ್ತೆ: 19/ಜೂ./2024

ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಜೂ. 26 ರಂದು ನಡೆಯುವ ರಾಜ್ಯ ಸರಕಾರದ ರೈತ ವಿರೋಧಿ ವಿರುದ್ಧ ಪ್ರತಿಭಟನೆ ಪ್ರಯುಕ್ತ ಕುಂದಾಪುರ ಬಿಜೆಪಿ ಕಚೇರಿ ಯಲ್ಲಿ ಪೂರ್ವಭಾವಿ ಸಭೆ

ಕುಂದಾಪುರ: ಉಡುಪಿ ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಜೂ. 26 ರಂದು ನಡೆಯುವ ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿ, ಮುಂಭಾಗದಲ್ಲಿ ಬ್ರಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದ್ದು ಆ ಪ್ರಯುಕ್ತ ಇಂದು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಉಡುಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ರೈತಮೋರ್ಚಾ ಅಧ್ಯಕ್ಷರಾದ ಜಯಶೀಲ ಶೆಟ್ಟಿ ಮರತೂರು, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಶೆಟ್ಟಿ ಮತ್ತು ಕೃಷ್ಣಮೂರ್ತಿ ಕಾಂಚನ್, ಪುಷ್ಪರಾಜ್ ಬೈಂದೂರು, ಮೋಹನಚಂದ್ರ ಬೈಂದೂರು, ಶ್ಯಾಮಪ್ರಸಾದ್ ಭಟ್, ಸದಾನಂದ ಬಳ್ಕೂರು, ಸತೀಶ ಶೇರಿಗಾರ್ ಹಂಗ್ಲೂರು ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.