ಡೈಲಿ ವಾರ್ತೆ: 21/OCT/2024

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ
ವಿದ್ಯಾಕುಮಾರಿ ಅವರಿಂದ ಚಾಲನೆ

ಬ್ರಹ್ಮಾವರ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಅ. 21 ರಂದು ಸೋಮವಾರ ಜಿಲ್ಲಾಧಿಕಾರಿ
ಡಾ. ವಿದ್ಯಾಕುಮಾರಿ ಇವರು ವ್ಯಾಕ್ಸಿನ್ ಕ್ಯಾರಿಯರ್ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು.

ಪೇಜಾವರ ಮಠದ ಪೂಜ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಡಾ. ಎಂ ಸಿ ರೆಡ್ಡಪ್ಪ ಉಪ ನಿರ್ದೇಶಕರು (ಆಡಳಿತ)ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಡಾ. ಶಿವಯೋಗಿ ಯಲಿ ಉಪನಿರ್ದೇಶಕರು ಪಾಲಿ ಕ್ಲಿನಿಕ್, ಡಾ. ಸಂದೀಪ್ ಕುಮಾರ್ ಶೆಟ್ಟಿ ಮುಖ್ಯ ಪಶು ವೈದ್ಯಾಧಿಕಾರಿಗಳು (ತಾಂತ್ರಿಕ), ಡಾ. ಉದಯ್ ಕುಮಾರ್ ಶೆಟ್ಟಿ ಮುಖ್ಯಪಶುವೈದ್ಯಾಧಿಕಾರಿಗಳು (ಆಡಳಿತ)ಪಶು ಆಸ್ಪತ್ರೆ ಬ್ರಹ್ಮಾವರ, ಡಾ.ಸರ್ವೋತ್ತಮ ಉಡುಪ ಸದಸ್ಯರು ಗೋವರ್ಧನಗಿರಿ ಟ್ರಸ್ಟ್ , ಡಾ. ನಿಜಾಮ್ ಪಟೇಲ ಸಹಾಯಕ ವ್ಯವಸ್ಥಾಪಕರು ಕೆಎಂಎಫ್ ಹಾಗೂ ಬ್ರಹ್ಮಾವರ ತಾಲೂಕಿನ ಎಲ್ಲಾ ಪಶು ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಪಶುಸಖಿಯರು ಉಪಸ್ಥಿತರಿದ್ದರು.